(ಸಮರಬಾಹುವನ್ನೂ, ಅವನ ಅನುಚರನನ್ನೂ ಕರಡಿಜನರ ಗುಂಪಿನವರು ತಮ್ಮ ಬಿಲದ ಕೋಟೆ ಯೊಳಕ್ಕೆ ಕರೆದುಕೊಂಡು ಹೋದರು. ಖಡ್ಗಜೀವದತ್ತರು, ಒಂದು ಕಡೆ ಹೊಗೆ ಏಳುತ್ತಿದ್ದ ಪ್ರದೇಶವನ್ನು ಸೇರಿ, ಅದು ಬಿಲದ ಕೋಟೆಯೆಂದು ಗುರುತಿಸಿ ಒಳಗೆ ಹೋದರು. ಅಲ್ಲಿ ಅವರನ್ನು ಗುರು ಭಲ್ಲೂಕನ ಮನುಷ್ಯರು ತಡೆದು, ಹಿಡಿದು ಕೊಂಡು, ಒಂದು ಸುರಂಗ ಮಾರ್ಗವಾಗಿ ತೋಳಗಳ ಬಂಡೆಯ ಬಳಿಗೆ ಕರೆದುಕೊಂಡು ಹೊರಟರು. ನಂತರ) ಕತ್ತಲು ಮಯವಾಗಿದ್ದ ಸುರಂಗಮಾರ್ಗದಲ್ಲಿ, ಕರಡಿಜನರು ಸ್ವಲ್ಪ ದೂರ ಖಡ್ಗಜೀವದತ್ತರನ್ನು ನಡೆಸಿಕೊಂಡು ಹೋಗಿ, ಒಂದು ಕಡೆ ನಿಂತು ಕೊಂಡರು. ಮುಂದಿದ್ದ ಕರಡಿ ಜನರಲ್ಲೊಬ್ಬನು ತನ್ನ ಜೊತೆಗಾರನೊಡನೆ, ‘‘ಅಣ್ಣಾ! ಈ ಬಂದಿಗಳಿಬ್ಬರೂ ತೋಳಗಳ ಬಂಡೆ ಎಂದರೆ ಯಾವುದೋ ಒಂದು ವಿನೋದ ಸ್ಥಳ ಎಂದು ಕೊಂಡಂತಿದೆ. ಇದಕ್ಕೆ ಮುಂಚೆ ನಾವು ಹಿಡಿದು ತಂದ ವರೆಲ್ಲರೂ ಸಹಾ ತೋಳಗಳ ಅರಚುವಿಕೆ ಯನ್ನು ಕೇಳಿಯೇ ಭಯದಿಂದ ನಡನಡುಗಿ ಹೋಗುತ್ತಿದ್ದ ರು. ಇವರಿಗೆ ತೋಳಗಳ ಬಂಡೆ ಎಂದರೆ ಏನೆಂದು ಸ್ವಲ್ಪ ತೋರಿಸೋಣವೇ?’’ ಎಂದನು.
|
|
|