ipad/iphonetopBanner

ಕಥೆಗಳು

ಪಾ್ಕೃಾಳ ದುರ್ಗ 3

ಲೇಖಕ: ಚಂದಮಾಮ | 2nd Jan, 2012



(ಕದಂಬ ರಾಜದೂತರು ನಾಲ್ವರು, ಇಬ್ಬರು ಖೈದಿಗಳನ್ನು ಕರೆದು ಕೊಂಡು ಬಂದು, ಕುಂತಲ ದೇಶದ ರಾಜನೊಡನೆ, ಅವರೇ ಕಾಡಿನಲ್ಲಿ ಮಂತ್ರಿ ಕುಮಾರನನ್ನು, ಅವನ ಮಿತ್ರರನ್ನೂ ಕೊಂದವರೆಂದು ಹೇಳಿದರು. ನಂತರ ದೂತರು ಖೈದಿಗಳನ್ನು ಕರೆದುಕೊಂಡು ತಮ್ಮ ದೇಶಕೇ್ಕ ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಕುಂತಲ ಸೈನಿಕರು ಅಡ್ಡ ಬಂದು ಅವರಲ್ಲಿ ಇಬ್ಬರ ಕುತ್ತಿಗೇಗೇ ನೇಣುಹಗ್ಗವನ್ನ ಹಾಕಿ ಖೈದಿಗಳನ್ನು ಬಿಡಿಸಿದರು.   -ನಂತರ ಘೆ)
ಕದಂಬ ರಾಜದೂತರಿಬ್ಬರೂ ತಮ್ಮ ಕುದುರೆಗಳೊಡನೆ ಅಲ್ಲಿದ್ದ ಸಣ್ಣ ನದಿಯನ್ನು ದಾಟಿ ತಮ್ಮ ರಾಜ್ಯಕೇ್ಕ ಪ್ರವೇಶಿಸಿದರು. ಕುಂತಲ ಸೈನಿಕರು ಬಿಟ್ಟ ಬಾಣಗಳಾವುವೂ ಅವರಿಗೇ ಬೀಳಲಿಲ್ಲ. ಅರ್ಧರಾತ್ರಿ, ಮಂಕಾದ ಬೆಳುದಿಂಗಳು ಅರಣ್ಯ ಪ್ರದೇಶ ಆ ಕಾರಣಗಳಿಂದಾಗಿ ಸೈನಿಕರು ದೂತರ ಮೇಲೆ ಗುರಿಯಿಟ್ಟು ಬಾಣಗಳನ್ನು ಬಿಡಲಾರದೇ ಹೋದರು. ‘‘ನದಿಯನ್ನು ದಾಟಿ ಆ ದೂತರ ಬೆನ್ನಟ್ಟುವುದರಲ್ಲಿ ಆಪತ್ತಿದೆ. ಅವರಿಗೇ ಕದಂಬರಾಜ್ಯದ ಎಲ್ಲೆಯ ಕಾವಲುಗಾರರು ಸಹಾಯಕರಾಗಿ ಬರಬಹುದು. ಏನೇ ಆಗಲಿ ಅವರಿಬ್ಬರನ್ನು ಪಾ್ರಣ ಸಹಿತ ಬಿಡಕೂಡದು. ನಿಮ್ಮಲ್ಲಿ ಯಾರು ಶತೃ ರಾಜ್ಯದಲ್ಲಿ ನುಗ್ಗಿ ಅವರನ್ನು ಬೇಟೆಯಾಡಬಲ್ಲಿರಿ ಹೇಳಿರಿ. ಅವರನ್ನು ಕೊಂದವರಿಗೇ ಮಂತ್ರಿಗಳು ದೊಡ್ಡ ಬಹುಮಾನವನ್ನು ಕೊಡುತಾ್ತರೆ.’’ ಎಂದನು ಕುಂತಲ ಸೈನಿಕರ ನಾಯಕನು. ಆ ಮಾತನ್ನು ಕೇೀಳಿದೊಡನೆಯೇ ಧೂಮಕನು ಮುಂದೆ ಬಂದು ‘‘ಸಾ್ವಮೀ ನಾನೂ ಸೋಮಕನೂ ಆ ಕೇಲಸ ಮಾಡಬಲ್ಲೆವು.


ಸಂಬಂಧಿತ ಕಥೆಗಳು

Customer Help Nos
BannerBanner